Sunday, May 2, 2010

ಏಪ್ರಿಲ್ ಫೂಲ್ !

ಬೆಂಗಳೂರಿನ ಕಾಲೇಜೊಂದರ ಕ್ರೀಡಾಂಗಣ. ಮಧ್ಯದಲ್ಲಿರುವ ಬಾಸ್ಕೆಟ್ ಬಾಲ್ ಅಂಗಳದ ಸುತ್ತಲೂ ಕಿಕ್ಕಿರಿದು ತುಂಬಿಕೊಂಡು ಕೂತ ವಿದ್ಯಾರ್ಥಿಗಳು. ಸುಮ್ಮನೇ ಹೀಗೆ ಗಾಳಿ ಸೋಕಿದರೂ ಕಿಸಕ್ಕೆನ್ನುವ ವಯಸ್ಸಿನ ಹುಡುಗಿಯರು, ಬೆನ್ನ ಹಿಂದ ಕೂತ ಹುಡುಗರ ನಿಮಿತ್ತ ಮಾತ್ರದ 'ಏನ್ ಮಗಾ' ಡಯಲಾಗುಗಳಿಗೆ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಮಧ್ಯೆ ಮಧ್ಯೆ ತಮ್ಮೊಳಗೇ ಮಾತಾಡಿಕೊಂಡು ನಗುತ್ತ, 'ನಾವು ಈಗಷ್ಟೇ ನಕ್ಕಿದ್ದು ನೀವಂದಿದ್ದಕ್ಕಲ್ಲ' ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಹುಡುಗರ ಕ್ರಿಯಾಶೀಲತೆ ಇನ್ನೂ ಹೆಚ್ಚುತ್ತಿದೆ. ಪಿಯುಸಿಯಿಂದ ಹಿಡಿದು ಡಿಗ್ರಿಯವರೆಗೆನ, ಸಾವಿರಗೆಟ್ಟಲೆ ಇರುವ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ಕಲರವದ ಮಧ್ಯೆ, ಹಳ್ಳಿಯೊಂದರ ಕಾಲೇಜಿನಿಂದ ಮೊದಲ ಬಾರಿಗೆ ಬೆಂಗಳೂರಿಗೆ ಬಂದು, ಕ್ರೀಡಾಂಗಣದ ಮಧ್ಯದಲ್ಲಿ ಒಬ್ಬನೇ ನಿಲ್ಲಬೇಕೆಂದರೆ ಎಂಟೆದೆ ಬೇಕು!

ಹಾಗೆ ನಿಂತಿದ್ದಾನೆ, ದೂರದ ಅಂಕೋಲಾದಿಂದ ಬಂದಿರುವ ಗಣಪತಿ ನಾಯ್ಕ! ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ!

Saturday, February 13, 2010

ತಲೆಬುಡವಿಲ್ಲದ್ದು

ಇದು  ನಿನ್ನೆ ಬೆಳಿಗ್ಗೆ ನಡೆದಿದ್ದು.

ಸರಕಾರದವರು ಹೊಸದಾಗಿ ಮಾಡಿರುವ ರಸ್ತೆ. ಹೊಸ ರಸ್ತೆಗಳು ಅಪರೂಪವಾದ್ದರಿಂದ ಜನ ಸ್ವಲ್ಪ ವೇಗವಾಗಿಯೇ ಚಲಿಸುತ್ತಾರೆ. ಅದು ಗೊತ್ತಿರುವುದರಿಂದಲೇ, ಸರಿಯಾಗಿ, ತಿರುವು ಇರುವ ಕಡೆ ಒಂದು 'ಹಂಪ್' ಇಟ್ಟಿದ್ದಾರೆ. ಅದು ಇರುವ ಜಾಗದಲ್ಲಿಯೇ ಇವತ್ತು ಕಾಲು ಸ್ವಲ್ಪ ಊನವಿರುವ ವ್ಯಕ್ತಿಯೊಬ್ಬ 'ಲಿಫ್ಟ್' ಗಾಗಿ ಕೈ ತೋರಿಸುತ್ತ ನಿಂತಿರುವುದು ಕಾಣಿಸಿತು.


Wednesday, November 18, 2009

ಕನ್ನಡ ಮತ್ತು ಎನ್ನಡ

ಕನ್ನಡ ಸಂಘವೊಂದು ಕನ್ನಡ ಮಾತನಾಡದ ರೆಡಿಯೋ ಸ್ಟೇಷನ್ ಮೇಲೆ ದಾಳಿ ಮಾಡಿದ ಸುದ್ದಿ ಪೇಪರಿನಲ್ಲಿತ್ತು. "ಏನು ಮೂರ್ಖತನ ನೋಡು. ಜನ ಬೇಕಾದ್ದು ಕೇಳುತ್ತಾರೆ, ಹೀಗ್ಯಾಕೆ ಇವರು ಕಂಡವರ ಮೇಲೆಲ್ಲ ಹರಿಹಾಯುತ್ತಾರೆ? cheap ರಾಜಕೀಯ", ಇಂಗ್ಲೀಷಿನಲ್ಲಿ ಹೇಳಿದಳು.

Monday, November 9, 2009

ಶಾಂತಾರಾಂ ಮತ್ತು ಅಲಾರಾಂ

ಶಾಂತಾರಾಮನಿಗೆ ಇತ್ತಿತ್ತಲಾಗಿ ಒಂದು ಕಿವಿ ಕೇಳಿಸುತ್ತಿಲ್ಲ.

ಬೆಳಗಿನ ಜಾವ ಐದು ಘಂಟೆಗೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಯಾವತ್ತೂ ಅಷ್ಟು ಬೇಗ ಎದ್ದಿರದ ಶಾಂತಾರಾಮನಿಗೆ ತಾನು ಯಾರು ಎನ್ನುವುದು ಗೊತ್ತಾಗಲು ಐದು ಸೆಕೆಂಡೂ, ತಾನೆಲ್ಲಿದ್ದೇನೆ ಎಂದು ಗೊತ್ತಾಗಲು ಮತ್ತೈದು ಸೆಕೆಂಡೂ, ಈಗ ಕಿರುಚುತ್ತಿರುವುದು ಅಲಾರಾಂ ಎಂದು ಗೊತ್ತಾಗಲು ಇನ್ನೆರಡು ಸೆಕೆಂಡೂ ಹಿಡಿಯಿತು. ಮತ್ತೆರಡು ಸೆಕೆಂಡುಗಳಲ್ಲಿ ಅಲಾರಾಮಿನ ಬಾಯಿ ಮುಚ್ಚಿಸದಿದ್ದರೆ ಪಕ್ಕದ ರೂಮಿನಲ್ಲಿ ರಾತ್ರಿ ಲೇಟಾಗಿ ಮಲಗಿರುವ ರತ್ನಮಾಲ ಎದ್ದು ಬಂದು ಕೆಂಡ ಕಾರುತ್ತಾಳೆಂಬ ಎಚ್ಚರ ಆ ನಿದ್ದೆಗಣ್ಣಿನಲ್ಲೂ ಶಾಂತಾರಾಮನಿಗೆ ಉಂಟಾಯಿತು. ರತ್ನಮಾಲಾ ಅವನ ಹೆಂಡತಿ. ಶಾಂತಾರಾಮನ ಗೊರಕೆಯಿಂದಾಗಿ ರತ್ನಮಾಲಾಳೂ, ರತ್ನಮಾಲಾಳ ಬೈಗುಳದಿಂದಾಗಿ ಶಾಂತಾರಾಮನೂ ಬೇರೆ ಬೇರೆ ರೂಮಿನಲ್ಲಿ ಮಲಗುತ್ತಾರೆ. ಶಾಂತಾರಾಮ ಮಲಗಿದಲ್ಲಿಂದಲೇ ಅಲಾರಾಮಿನ ತಲೆಯ ಮೇಲೆ ಬಡಿದ. ಅಲಾರಾಂ ಬಾಯಿ ಮುಚ್ಚಲಿಲ್ಲ!

Tuesday, November 3, 2009

ಚಕ್ರದಿಂದ ಚಕ್ರಕ್ಕೆ...

ಬಸ್ಸಲ್ಲಿ ಓಡಾಡುವುದು ಮಹಾಕಷ್ಟ ಎಂದು ಗೊತ್ತಾದದ್ದು ಮೂರು ತಿಂಗಳ ಸಂಬಳ ಬಂದು ಹಳೆಯ ಸಾಲವೆಲ್ಲ ತೀರಿ, ಬ್ಯಾಂಕಿನಲ್ಲಿ ಶೇಖರಕೊಂಡ ಇಪ್ಪತ್ತು ಸಾವಿರ ರೂಪಾಯಿ ಕಣ್ಣು ಕುಕ್ಕತೊಡಗಿದಾಗ! ತಡವೇಕೆ ಎಂದು ಅದೇ ತಿಂಗಳು ಒಂದು ಬೈಕ್ ಕೊಂಡುಕೊಂಡೆ. ಉಳಿದ ದುಡ್ಡಿಗೆ ಬ್ಯಾಂಕುಗಳಿದ್ದಾವಲ್ಲ. ಅವರಿರುವುದೇತಕ್ಕೆ?

ನನ್ನದು ಸಖ್ಖತ್ ಲೇಟೆಸ್ಟ್ ಬೈಕು. ಥೇಟ್ ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆ(ನಾನ್ಯಾವತ್ತೂ ಕಾರಿನಲ್ಲಿ ಕೂತಿಲ್ಲ, ಇದು ಹಾಗೆಂದು ನನ್ನ ಸ್ನೇಹಿತರು ಹೇಳುವುದನ್ನು ಕೇಳಿದ್ದೇನೆ). ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆಂದು ನನ್ನ ಕೆಲವು ಸ್ನೇಹಿತರಿಗೂ ನಾನೇ ಹೇಳಿದೆ.